ಕಾರ್ಯಕ್ರಮವನ್ನು ಸರ್ವೋದಯ ಪ್ರೌಢಶಾಲೆ ಕಲ್ಲಮುಂಡ್ಕೂರಿನ ಸಂಚಾಲಕ ಜಯಪ್ರಕಾಶ್ ಪಡಿವಾಳ್, ಪುರೋಹಿತ ಶ್ರೀಧರ್ ಭಟ್, ಬಿಲ್ಲವರ ಸಂಘ ಕಲ್ಲಮುಂಡ್ಕೂರಿನ ಅಧ್ಯಕ್ಷ ಸಂದೀಪ್ ಸಾಲ್ಯಾನ್ ಹಾಗೂ ಬ್ರಹ್ಮ ಬೈದರ್ಕಳ ಗರಡಿ ಕಲ್ಲಮುಂಡ್ಕೂರಿನ ಅಧ್ಯಕ್ಷ ಕೇಶವ ಪೂಜಾರಿ ಪಂಜಾಡಿ ಉದ್ಘಾಟಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಸಾದ್ ಕುಮಾರ್, ಸದಾನಂದ ಪೂಜಾರಿ, ಶೀನ ಪರವ, ಶ್ರೀಧರ್ ಭಟ್, ದೇವದಾಸ್ ಕಾಮತ್ ಹಾಗೂ ಸ್ಟ್ಯಾನಿ ರೊನಾಲ್ಡ್ ಡಿಸೋಜಾ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕ್ರೀಡಾಕೂಟದಲ್ಲಿ ಎಂ.ಪಿ.ಪಿ. ಕಳಸ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ‘ಬ್ರಹ್ಮಶ್ರೀ ಟ್ರೋಫಿ–2026’ ಅನ್ನು ತನ್ನದಾಗಿಸಿಕೊಂಡಿತು. ಬಿಲ್ಲವಾಸ್ ಕಲ್ಲಮುಂಡ್ಕೂರು ತಂಡ ದ್ವಿತೀಯ ಸ್ಥಾನ ಪಡೆದು ರನ್ನರ್ಅಪ್ ಪ್ರಶಸ್ತಿಗೆ ಪಾತ್ರವಾಯಿತು. ವಿಜೇತ ತಂಡಗಳಿಗೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.
ಶಾಸಕ ಉಮಾನಾಥ ಕೋಟ್ಯಾನ್, ನಾರಾಯಣ ಗುರು ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ನಿಡ್ಡೋಡಿ ಜ್ಞಾನರತ್ನ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಭಾಸ್ಕರ್ ದೇವಸ್ಯ, ನಿಡ್ಡೋಡಿ ಸುಂದರ್ ಪೂಜಾರಿ, ಬ್ರಹ್ಮಶ್ರೀ ನಾರಾಯಣ ಗುರು ಯುವ ಘಟಕದ ಅಧ್ಯಕ್ಷ ಮನೋಜ್ ಪೂಜಾರಿ, ಬಿಲ್ಲವರ ಸಂಘ ಕಲ್ಲಮುಂಡ್ಕೂರಿನ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಮೋಹನ್ ದಾಸ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುಕುಮಾರ್ ಅಮೀನ್ ಹಾಗೂ ಸೌಜನ್ಯ ಡಿ.ಎಸ್ ನಿರೂಪಿಸಿದರು.


