ಹೊಸಬೆಟ್ಟು ಗ್ರಾ.ಪಂ. ನೂತನ ಕಟ್ಟಡಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಶಂಕುಸ್ಥಾಪನೆ

BIDIRE NEWS

ಮೂಡುಬಿದಿರೆ: ಹೊಸಬೆಟ್ಟು ಗ್ರಾಮ ಪಂಚಾಯಿತಿಯ ನೂತನ ಕಾರ್ಯಾಲಯದ ಕಟ್ಟಡಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ ಸದಾಶಿವ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಹೊಸಬೆಟ್ಟು ಚರ್ಚ್‌ನ ಧರ್ಮಗುರುಗಳಾದ ವಂ. ಗ್ರೆಗರಿ ಡಿಸೋಜ, ಪುಚ್ಚೆಮೊಗರು ಎಲಿಯಾ ಮಸೀದಿಯ ಧರ್ಮಗುರು ಅಲ್ತಾಫ್ ಮುಸ್ಲಿಯಾರ್ ಹಾಗೂ ಕಿಶೋರ್ ಭಟ್ ಪಾಲ್ಗೊಂಡಿದ್ದರು.  ಪಂಚಾಯಿತಿ ಸದಸ್ಯರಾದ ವಿಲ್ಫ್ರೆಡ್ ಮೆಂಡೋನ್ಸಾ, ಪ್ರದೀಪ್ ಪೂಜಾರಿ, ಸಚ್ಚೀಂದ್ರ, ಚಂದ್ರಹಾಸ ಸನಿಲ್, ರೆಕ್ಸಾನ್ ಪಿಂಟೋ, ಮೀನಾಕ್ಷಿ, ರುಕಯ್ಯಾ, ಹರಿಣಾಕ್ಷಿ ಉಪಸ್ಥಿತರಿದ್ದರು. ಅಲ್ಲದೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ  ಸವಿತಾ ಸೇರಿದಂತೆ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.

slider